ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ ವರ್ಧಂತಿ ಉತ್ಸವ ನಿಮಿತ್ತ ಅವರ ದಿವ್ಯ ಸಾನ್ನಿಧ್ಯದಲ್ಲಿ ಮತ್ತು ಕಿರಿಯ ಸ್ವಾಮೀಜಿ ಶ್ರೀ ಆನಂದಬೋಧೇಂದ್ರ ಸರಸ್ವತೀ ಶ್ರೀಗಳ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಗ್ರಾಮಾಭ್ಯುದಯ ಸಂಸ್ಥೆಯ ಸಹಕಾರದಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ, ಔಷಧಗಳ ವಿತರಣೆ ರಕ್ತದಾನ ಶಿಬಿರ ಜೂನ್ 4 ರಂದು ನಡೆಯಲಿದೆ.
ವರ್ಧಂತಿ ಉತ್ಸವದ ಅಂಗವಾಗಿ ಮುಂಜಾನೆ ಸಹಸ್ರಾವರ್ತನ ಅಥರ್ವಶೀರ್ಷ ಪಾರಾಯಣ ಹಾಗೂ ಹವನ, ನಾಲ್ಕು ಕಾಯಿ ಮಹಾಗಣಪತಿ ಹವನ, ಶ್ರೀಸೂಕ್ತ, ಪುರುಷ ಸೂಕ್ತ ಪಾರಾಯಣ, ಹವನ, ಮಹಾಮೃತ್ಯುಂಜ ಜಪ, ಹವನ, ಗ್ರಹ ಶಾಂತಿ, ಆಯುಷ್ಯಚರು ಶಾಂತಿ ಮೊದಲಾದ ವೈದಿಕ ಕಾರ್ಯಕ್ರಮಗಳು ನಡೆಯಲಿವೆ.
ಟಿಎಸ್ಎಸ್ ಆಸ್ಪತ್ರೆ, ಪಂಡಿತ್ ಆಸ್ಪತ್ರೆ ರಕ್ತ ನಿಧಿ ಘಟಕ, ಸೋಂದಾ ಸೊಸೈಟಿ, ತಾಲೂಕು ಆರೋಗ್ಯ ಇಲಾಖೆ, ಶ್ರೀ ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನ, ಜಾಗೃತ ವೇದಿಕೆ, ಹುಲೇಕಲ್ ಶ್ರೀದೇವಿ ಶಿಕ್ಷಣ ಸಂಸ್ಥೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹುಲೇಕಲ್, ಗೋಳಿಕೊಪ್ಪ ಸಹೋದರರ ಸಹಕಾರದಲ್ಲಿ ಗ್ರಾಮಾಭ್ಯುದಯ ವೈದ್ಯಕೀಯ ಶಿಬಿರವನ್ನು ಸಂಯೋಜಿಸಿದೆ. ವೈದ್ಯರಾದ ಡಾ.ಸುಮನ್ ಹೆಗಡೆ, ಡಾ.ಪಿ.ಎಸ್.ಹೆಗಡೆ, ಡಾ.ಮಧುಕರ ಪಾಟೀಲ, ಡಾ.ಸ್ವಾತಿ ನಾಡಿಗೇರ ಭಾಗವಹಿಸುವವರು. ಮಠದ ಸುಧರ್ಮಾ ಸಭಾಂಗಣದಲ್ಲಿ ಬೆಳಿಗ್ಗೆ 10 ರಿಂದ 1.30ರ ತನಕ ಈ ಶಿಬಿರ ಆಯೋಜಿತವಾಗಿದೆ. ಶಿಬಿರದಲ್ಲಿ ಭಾಗವಹಿಸುವ ಆಸಕ್ತರು ಎಂ.ಸಿ.ಹೆಗಡೆ ೯೪೮೨೦೩೯೪೯೧, ಎಂ.ಕೆ.ಗೋಳಿಕೊಪ್ಪ 9448446066, ಸಂತೋಷ ಕೋಡಿಗಾರ ೯೪೮೦೪೦೦೪೫೬ ಸಂಪರ್ಕ ಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.